2nd June 2025
ವರದಿ ; ರಾಜಶೇಖರ ಡೋಣಜಮಠ
ಚಡಚಣ;ಇಲಾಖೆಗಳ ಮಧ್ಯೆ ಸಮನ್ವದ ಕೊರತೆ ಇದ್ದರೆ ಸಾರ್ವಜನಿಕರು ಹೇಗೆ ತೊಂದರೆ ಅನುಭವಿಸುತ್ತಾರೆ ಎನ್ನುವದಕ್ಕೆ ಉತ್ತಮ ಉದಾರಹಣೆ ಚಡಚಣ ಪಟ್ಟಣ.
ಹೌದು ಚಡಚಣ ಪಟ್ಟಣದಲ್ಲಿ ಪಪಂ ಅಧಿಕಾರಿಗಳು ೧೫ ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ, ಇದರಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭಸುತ್ತಿದ್ದಾರೆ. ಬೇಸಿಗೆ ಇದೆ ನೀರಿನ ಮೂಲ ಬತ್ತಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದುಕೊಂಡರು ಅದು ತಪ್ಪು.
ಏಕೆಂದರೆ ಸದ್ಯ ಭೀಮಾ ನದಿಯಲ್ಲಿ ಸಾಕಷ್ಟು ನೀರಿದ್ದು, ಪಪಂ ಅಧಿಕಾರಿಗಳು ಸರಿಯಾಗಿ ಸರಿಯಾಗಿ ನೀರಿನ ನಿರ್ವಹಣೆ ಮಾಡಿದರೆ ಚಡಚಣ ಪಟ್ಟಣಕ್ಕೆ ೨-೩ ದಿನಕ್ಕೊಮ್ಮೆ ನೀರು ಕೊಡಬಹುದು. ಆದರೆ ಈ ನೀರಿನ ಸಮಸ್ಯೆಗೆ ಪ್ರಮುಖ ಕಾರಣ ವಿದ್ಯುತ್ ಪೂರೈಕೆ.
ಚಡಚಣ ಪಟ್ಟಣಕ್ಕೆ ನೀರು ಪೂರೈಸುವ ಪಂಪಸೆಟ್ಟುಗಳಿಗೆ ವಿದ್ಯುತ್ತ ಪೂರೈಸಲು ಹೊಳಿಸಂಖ ಹತ್ತಿರ ಜಾಕವೆಲ್ ನಿರ್ಮಾಣಮಾಡಲಾಗಿದೆ. ಈ ಜಾಕವೆಲ್ಗೆ ಚಡಚಣದಿಂದ ಒಂದು ವಿಶೇಷ ವಿದ್ಯುತ್ ಲೈನ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಕೆಪಿಟಿಎಸ್ಎಲ್ ಅಧಿಕಾರಿಗಳು ಈ ಎಕ್ಸಪ್ರೇಸ್ ಲೈನಗೆ ಹತ್ತಳ್ಳಿ, ಹಾವಿನಾಳ, ಸಂಖ ಮತ್ತು ಉಮರಾಣಿ ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಅವಕಾಶ ಕೊಟ್ಟಿದ್ದಾರೆ. ಈ ಗ್ರಾಮಗಳಲ್ಲಿ ವಿದ್ಯುತ್ ತೊಂದರೆಯಾದರೆ ಪ್ರತಿ ಬಾರಿ ವಿದ್ಯುತ್ತಚ್ಚಕ್ತಿಯನ್ನು ಕಡಿತಗೊಳಿಸಬೇಕಾಗುತ್ತದೆ. ಇದರಿಂದಾಗಿ ಚಡಚಣ ಪಟ್ಟಣಕ್ಕೆ ಭೀಮಾ ನದಿಯಿಂದ ನಿರಂತರ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಪಟ್ಟಣದ ೧೬ ವಾರ್ಡಗಳಲ್ಲಿ ೧೨-೧೫ ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಕುರಿತು ಪಪಂ ಅಧ್ಯಕ್ಷರನ್ನು ಮತ್ತು ಮುಖ್ಯಾಧಿಕಾರಿಗಳನ್ನು ಕೇಳಿದರೆ ವಿದ್ಯುತ್ ಸಮಸ್ಯೆಯಿಂದ ಹೀಗಾಗುತ್ತಿದೆ ಎನ್ನುತ್ತಾರೆ. ಗಂಡ-ಹೆAಡತಿಯ ನಡುವೆ ಕೂಸು ಬಡವಾಯಿತು ಎನ್ನುವ ಹಾಗೆ ಪಪಂ ಮತ್ತು ಹೆಸ್ಕಾಂ ನಡುವೆ ಸಮನ್ವಯದ ಕೊರತೆಯಿಂದಾಗಿ ಚಡಚಣದ ಸಾರ್ವಜನಿಕರು ನಿರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಎರಡು ಇಲಾಖೆಯ ಅಧಿಕಾರಿಗಳು ಕುಳಿತು ಸಮಸ್ಯೆಯನ್ನು ಬಗೆಹರಿಸಿ ಚಡಚಣ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎನ್ನುವದು ಸಾರ್ವಜನಿಕರ ಅಪೆಕ್ಷೆಯಾಗಿದೆ.
ಇನ್ನು ಮಳೆಗಾಲ ಪ್ರಾರಂಭವಾದರೆ ವಿದ್ಯುತ್ ಕಂಬ ಬಿದ್ದು ತಂತಿ(ಲೈನ್)ಕಟ್ಟಾಗಿ ವಿದ್ಯುತ್ ಸಮಸ್ಯೆ ಇನ್ನಷ್ಟು ಉಲ್ಭಣಗೊಳ್ಳುತ್ತದೆ ಇದರಿಂದ ಪಟ್ಟಣಕ್ಕೆ ನೀರು ಪೂರೈಕೆ ತಿಂಗಳಿಗೊಮ್ಮೆ ಆದರು ಆಗುತ್ತದೆ.
ಮಲ್ಲಿಕಾರ್ಜುನ ಧೋತ್ರೆ ಅಧ್ಯಕ್ಷರು ಪಪಂ ಚಡಚಣ
ಚಡಚಣಕ್ಕೆ ನೀರು ಪೂರೈಸುವ ವಿದ್ಯುಚ್ಚಕ್ತಿ ಲೈನಗೆ ಹೆಸ್ಕಾಂ(ಕೆಇಬಿ) ಅಧಿಕಾರಿಗಳು ಕೆಲವು ಹಳ್ಳಿಗಳ ನಿರಂತರ ಜ್ಯೋತಿ ವಿದ್ಯುತ್ ಕೊಟ್ಟಿರುವದರಿಂದ ಈ ಸಮಸ್ಯೆಯಾಗುತ್ತಿದೆ. ನಾವು ಅನೇಕ ಬಾರಿ ಈ ಸಮಸ್ಯೆಯನ್ನು ಸರಿಪಡಿಸುವಂತೆ ಕೋರಿ ಹೆಸ್ಕಾಂ(ಕೆಇಬಿ) ಅಧಿಕಾರಿಗಳಿಗೆ ಮನವಿಯನ್ನು ಕೊಟ್ಟಿದ್ದೆವೆ. ಅವರು ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಭೀಮಾ ನದಿಯಲ್ಲಿ ನೀರಿದ್ದರೂ ಚಡಚಣದ ಜನ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಈ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಶಿಘ್ರದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೆನೆ.
ವಿಜಯಕುಮಾರ ಹವಾಲ್ದಾರ ಎಇಇ ಹೆಸ್ಕಾಂ ಚಡಚಣ
ಚಡಚಣ ನೀರು ಪೂರೈಕೆಯ ಮೇನ್ ಲೈನಿಗೆ ಕೆಲವು ಹಳ್ಳಿಗಳಿಗೆ ವಿದ್ಯುತ್ ಜೋಡಣೆ ನೀಡಿದ್ದು ನನ್ನ ಗಮನಕ್ಕೆ ಬಂದಿದೆ,. ಇದು ಕೆಲವು ವರ್ಷಗಳ ಹಿಂದೆ ನಡೆದಿದೆ, ಇಗ ಇದನ್ನು ಮೇಲಾಧಿಕಾರಿಗಳ ಮತ್ತು ಶಾಸಕರ ಗಮನಕ್ಕೂ ತರಲಾಗಿದೆ. ಇಗಾಗಲೆ ಎಷ್ಟಿಮೇಶನ್ ಮಾಡಲಾಗಿದ್ದು ಒಂದು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ.